Hadeeth Cards
Da'wa cards that highlight great meanings from the noble prophetic hadiths in a simple style and attractive display that helps the Muslim to have a deeper understanding of his religion in an easy way






























Da'wa cards that highlight great meanings from the noble prophetic hadiths in a simple style and attractive display that helps the Muslim to have a deeper understanding of his religion in an easy way
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ಎರಡು ವಿಷಯಗಳನ್ನು ತಿಳಿಸುತ್ತಿದ್ದಾರೆ. ಮುಸಲ್ಮಾನನು ಅವೆರಡನ್ನು ಸರಿಯಾಗಿ ಉಪಯೋಗಿಸಿದರೆ ಅವನು ಸ್ವರ್ಗವನ್ನು ಪ್ರವೇಶಿಸುತ್ತಾನೆ. ಮೊದಲನೆಯದು: ಸರ್ವಶಕ್ತನಾದ ಅಲ್ಲಾಹು ಕೋಪಗೊಳ್ಳುವಂತಹ ಮಾತುಗಳನ್ನು ಆಡದಂತೆ ನಾಲಿಗೆಯನ್ನು ಹದ್ದುಬಸ್ತಿನಲ್ಲಿಡುವುದು. ಎರಡನೆಯದು: ಅಶ್ಲೀಲ ಕೃತ್ಯಗಳಲ್ಲಿ ತೊಡಗದಂತೆ ಗುಪ್ತಾಂಗವನ್ನು ಹದ್ದುಬಸ್ತಿನಲ್ಲಿಡುವುದು. ಏಕೆಂದರೆ, ಪಾಪಗಳು ಹೆಚ್ಚಾಗಿ ಈ ಎರಡು ಅಂಗಗಳಿಂದಲೇ ಸಂಭವಿಸುತ್ತವೆ.
ಲಾಇಲಾಹ ಇಲ್ಲಲ್ಲಾಹ್ ಅತಿಶ್ರೇಷ್ಠ ಸ್ಮರಣೆ (ದಿಕ್ರ್) ಮತ್ತು ಅಲ್-ಹಮ್ದುಲಿಲ್ಲಾಹ್ ಅತಿಶ್ರೇಷ್ಠ ಪ್ರಾರ್ಥನೆ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ತಿಳಿಸುತ್ತಾರೆ. ಲಾಇಲಾಹ ಇಲ್ಲಲ್ಲಾಹ್ ಎಂದರೆ ಆರಾಧನೆಗೆ ಅಲ್ಲಾಹು ಮಾತ್ರ ಅರ್ಹನು ಎಂದು ನಂಬುವುದು. ಅಲ್-ಹಮ್ದುಲ್ಲಿಲ್ಲಾಹ್ ಎಂದರೆ ಅಲ್ಲಾಹು ಮಾತ್ರ ಅನುಗ್ರಹದಾತನು ಮತ್ತು ಅವನು ಎಲ್ಲಾ ಸಂಪೂರ್ಣ ಮತ್ತು ಸುಂದರ ವರ್ಣನೆಗಳಿಗೆ ಅರ್ಹನಾಗಿದ್ದಾನೆ ಎಂದು ನಂಬುವುದು.
ಮನುಷ್ಯನ ಚಪ್ಪಲಿಯ ಮೇಲಿರುವ ತೊಗಲಪಟ್ಟಿಗಿಂತಲೂ ಸ್ವರ್ಗ ಮತ್ತು ನರಕ ಅವನಿಗೆ ಹತ್ತಿರದಲ್ಲಿದೆ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸಿದ್ದಾರೆ. ಏಕೆಂದರೆ, ಅವನು ಅಲ್ಲಾಹನನ್ನು ಸಂಪ್ರೀತಗೊಳಿಸುವ ಒಂದು ಸತ್ಕರ್ಮವನ್ನು ಮಾಡಿ ಸ್ವರ್ಗವನ್ನು ಪ್ರವೇಶಿಸಬಹುದು, ಅಥವಾ ಒಂದು ಪಾಪವನ್ನು ಮಾಡಿ ಅದು ಅವನ ನರಕ ಪ್ರವೇಶಕ್ಕೆ ಕಾರಣವಾಗಬಹುದು.
ಮನಸ್ಸು ಮೋಹಿಸುವ ಕಾರ್ಯಗಳಿಂದ, ಅಂದರೆ ನಿಷೇಧಿಸಲಾದ ಕೃತ್ಯಗಳನ್ನು ಮಾಡುವುದು, ಕಡ್ಡಾಯ ಕರ್ಮಗಳನ್ನು ಸರಿಯಾಗಿ ನಿರ್ವಹಿಸುತ್ತಿರುವುದು ಮುಂತಾದವುಗಳಿಂದ ಸ್ವರ್ಗವನ್ನು ಮುಚ್ಚಲಾಗಿದೆ ಮತ್ತು ಸುತ್ತುವರಿಯಲಾಗಿದೆ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ವಿವರಿಸುತ್ತಾರೆ. ಯಾರ ಮನಸ್ಸು ಈ ವಿಷಯಗಳಲ್ಲಿ ಅವನ ಮೋಹಗಳನ್ನು ಹಿಂಬಾಲಿಸುತ್ತದೋ ಅವನು ನರಕಕ್ಕೆ ಅರ್ಹನಾಗಿದ್ದಾನೆ. ಕಡ್ಡಾಯ ಕರ್ಮಗಳನ್ನು ಸರಿಯಾಗಿ ನಿರ್ವಹಿಸುವುದು, ನಿಷೇಧಿಸಲಾದ ಕೃತ್ಯಗಳನ್ನು ತೊರೆಯುವುದು ಮತ್ತು ಅದಕ್ಕಾಗಿ ಸಹನೆಯಿಂದ ಇರುವುದು ಮುಂತಾದ ಮನಸ್ಸು ಇಷ್ಟಪಡದ ಕಾರ್ಯಗಳಿಂದ ಸ್ವರ್ಗವನ್ನು ಮುಚ್ಚಲಾಗಿದೆ ಮತ್ತು ಸುತ್ತುವರಿಯಲಾಗಿದೆ. ಯಾರು ಈ ವಿಷಯದಲ್ಲಿ ಮನಸ್ಸಿನ ಆಸೆಗಳಿಗೆ ವಿರುದ್ಧವಾಗಿ ನಿಂತು ಪರಿಶ್ರಮ ಪಡುತ್ತಾನೋ ಅವನು ಸ್ವರ್ಗಕ್ಕೆ ಅರ್ಹನಾಗಿದ್ದಾನೆ.
ಒಬ್ಬ ಮುಸಲ್ಮಾನನಿಗೆ ಇನ್ನೊಬ್ಬ ಮುಸಲ್ಮಾನನ ಮೇಲಿರುವ ಕೆಲವು ಹಕ್ಕುಗಳನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ವಿವರಿಸುತ್ತಾರೆ. ಮೊದಲನೆಯ ಹಕ್ಕು, ಮುಸಲ್ಮಾನನು ಸಲಾಂ ಹೇಳಿದರೆ ಅದಕ್ಕೆ ಉತ್ತರಿಸುವುದು. ಎರಡನೆಯ ಹಕ್ಕು: ರೋಗಿಯಾದರೆ ಅವನನ್ನು ಭೇಟಿ ಮಾಡುವುದು. ಮೂರನೆಯ ಹಕ್ಕು: ಅವನ ಮೃತದೇಹವನ್ನು ಮನೆಯಿಂದ ನಮಾಝ್ ಮಾಡುವ ಸ್ಥಳದವರೆಗೆ, ಅಲ್ಲಿಂದ ದಫನ ಮಾಡುವ ಸ್ಥಳದವರೆಗೆ ದಫನ ಕಾರ್ಯ ಮುಗಿಯುವ ತನಕ ಹಿಂಬಾಲಿಸುವುದು. ನಾಲ್ಕನೆಯ ಹಕ್ಕು: ಅವನು ಮದುವೆಯ ಔತಣ ಅಥವಾ ಇತರ ಸಮಾರಂಭಗಳಿಗೆ ಆಮಂತ್ರಿಸಿದರೆ ಆಮಂತ್ರಣವನ್ನು ಸ್ವೀಕರಿಸುವುದು. ಐದನೆಯ ಹಕ್ಕು: ಸೀನಿದ ನಂತರ ಅವನು “ಅಲ್-ಹಮ್ದುಲಿಲ್ಲಾಹ್” ಎಂದು ಹೇಳಿದರೆ “ಯರ್ಹಮುಕಲ್ಲಾಹ್” ಎಂದು ಹೇಳುವುದು, ನಂತರ ಅವನು ಅದಕ್ಕೆ ಉತ್ತರವಾಗಿ “ಯಹ್ದೀಕುಮುಲ್ಲಾಹು ವಯುಸ್ಲಿಹು ಬಾಲಕುಮ್” ಎಂದು ಹೇಳುವುದು.
ಮಾರಾಟ ಮಾಡುವಾಗ ಸರಳ, ಉದಾರ ಮತ್ತು ಕೊಡುಗೈಯಾಗಿರುವ ವ್ಯಕ್ತಿಗೆ ದಯೆ ತೋರಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಪ್ರಾರ್ಥಿಸುತ್ತಾರೆ. ಆದ್ದರಿಂದ ಬೆಲೆಯ ವಿಷಯದಲ್ಲಿ ಗ್ರಾಹಕನೊಂದಿಗೆ ಕಠೋರವಾಗಿ ವರ್ತಿಸಬಾರದು, ಉತ್ತಮ ಗುಣದಿಂದ ವ್ಯವಹರಿಸಬೇಕು. ಖರೀದಿಸುವಾಗ ಸರಳ, ಉದಾರ ಮತ್ತು ಕೊಡುಗೈಯಾಗಿರಬೇಕು. ಜಿಪುಣತನ ತೋರಬಾರದು ಮತ್ತು ವಸ್ತುವಿನ ಮೌಲ್ಯಕ್ಕಿಂತ ಕಡಿಮೆ ಹಣ ಕೊಡಬಾರದು. ಸಾಲ ಮರುಪಾವತಿಯನ್ನು ಕೇಳುವಾಗ ಸರಳ, ಉದಾರ ಮತ್ತು ಕೊಡುಗೈಯಾಗಿರಬೇಕು. ಬಡವರು ಮತ್ತು ಕಷ್ಟದಲ್ಲಿರುವವರನ್ನು ಸತಾಯಿಸಬಾರದು. ಬದಲಿಗೆ, ಮೃದುವಾಗಿ ಸೌಮ್ಯವಾಗಿ ಕೇಳಬೇಕು. ಕಷ್ಟದಲ್ಲಿರುವವರಿಗೆ ಮರುಪಾವತಿಗಾಗಿ ಸಮಯವನ್ನು ಹೆಚ್ಚಿಸಬೇಕು.
ಜನರೊಡನೆ ಸಾಲ ವ್ಯವಹಾರ ಮಾಡುತ್ತಿದ್ದ, ಅಥವಾ ಅವರಿಗೆ ಸಮಯಾವಕಾಶ ನೀಡಿ ಮಾರಾಟ ಮಾಡುತ್ತಿದ್ದ ಒಬ್ಬ ವ್ಯಕ್ತಿಯ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುತ್ತಾರೆ. ಜನರಿಂದ ಬರಬೇಕಾದ ಸಾಲದ ಹಣವನ್ನು ಸಂಗ್ರಹ ಮಾಡುತ್ತಿದ್ದ ತನ್ನ ಸೇವಕನೊಂದಿಗೆ ಆತ ಹೇಳುತ್ತಿದ್ದ: ಸಾಲ ಮರುಪಾವತಿ ಮಾಡಲು ಸಾಮರ್ಥ್ಯವಿಲ್ಲದ ವ್ಯಕ್ತಿಯ ಬಳಿಗೆ ಹೋದರೆ ಆತನನ್ನು ಕಡೆಗಣಿಸು. ಅಂದರೆ ಒಂದೋ ಆತನಿಗೆ ಸ್ವಲ್ಪ ಸಮಯಾವಕಾಶ ನೀಡು; ಆತನನ್ನು ಸತಾಯಿಸಬೇಡ. ಅಥವಾ ಅವನ ಬಳಿ ಏನು ಇದೆಯೋ ಅದನ್ನು ಪಡೆದುಕೋ, ಅದು ಕಡಿಮೆಯಾದರೂ ತೊಂದರೆ ಇಲ್ಲ. ಅಲ್ಲಾಹು ತನ್ನ ಪಾಪಗಳನ್ನು ಮನ್ನಿಸಬೇಕು ಮತ್ತು ಕಡೆಗಣಿಸಬೇಕು ಎಂಬ ಆಸೆ ಮತ್ತು ನಿರೀಕ್ಷೆಯಿಂದಲೇ ಆತ ಹೀಗೆ ಮಾಡುತ್ತಿದ್ದ. ಆದ್ದರಿಂದ, ಆತ ಮರಣ ಹೊಂದಿದಾಗ ಅಲ್ಲಾಹು ಆತನ ಪಾಪಗಳನ್ನು ಮನ್ನಿಸಿ ಕಡೆಗಣಿಸಿದನು.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಇಬ್ಬರು ಮುಸ್ಲಿಮರು ತಮ್ಮ ಖಡ್ಗಗಳ ಮೂಲಕ ಒಬ್ಬರು ಇನ್ನೊಬ್ಬರನ್ನು ಕೊಲ್ಲಬೇಕೆಂಬ ಉದ್ದೇಶದಿಂದ ಪರಸ್ಪರ ಎದುರಾದರೆ, ಕೊಲೆಗಾರನು ಕೊಲೆ ಮಾಡಿದ ಕಾರಣಕ್ಕಾಗಿ ನರಕವಾಸಿಯಾಗುತ್ತಾನೆ. ಆದರೆ ಕೊಲೆಯಾದವನು ಏಕೆ ನರಕವಾಸಿಯಾಗುತ್ತಾನೆಂಬ ವಿಷಯದಲ್ಲಿ ಸಂಗಡಿಗರಿಗೆ (ಸಹಾಬಾಗಳಿಗೆ) ಸಂಶಯವಾಯಿತು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಉತ್ತರಿಸಿದರು: ಅವನು ನರಕಕ್ಕೆ ಹೋಗುವುದೇಕೆಂದರೆ, ಅವನು ಕೂಡ ತನ್ನ ಎದುರಾಳಿಯನ್ನು ಕೊಲ್ಲಬೇಕೆಂಬ ಅತೀವ ಉತ್ಸಾಹವನ್ನು ಹೊಂದಿದ್ದ. ಆದರೆ ಎದುರಾಳಿಯೇ ಮೊದಲು ಖಡ್ಗ ಬೀಸಿದ್ದರಿಂದ ಅವನು ಮೊದಲು ಸತ್ತುಹೋದ.
ಪ್ರತಿಯೊಂದು ಕರ್ಮವನ್ನೂ ಉದ್ದೇಶಗಳ ಆಧಾರದ ಮೇಲೆ ಪರಿಗಣಿಸಲಾಗುತ್ತದೆಯೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುತ್ತಾರೆ. ಈ ನಿಯಮವು ಆರಾಧನೆಗಳು, ವ್ಯವಹಾರಗಳು ಮುಂತಾದ ಎಲ್ಲಾ ಕರ್ಮಗಳಿಗೂ ಸಮಾನವಾಗಿ ಅನ್ವಯಿಸುತ್ತದೆ. ಯಾರಾದರೂ ಒಂದು ಕರ್ಮದ ಮೂಲಕ ಲಾಭವನ್ನು ಉದ್ದೇಶಿಸಿದರೆ ಅವನಿಗೆ ಆ ಲಾಭವು ಸಿಗುತ್ತದೆಯೇ ವಿನಾ ಯಾವುದೇ ಪ್ರತಿಫಲ ಸಿಗುವುದಿಲ್ಲ. ಆದರೆ ಯಾರಾದರೂ ಒಂದು ಕರ್ಮದ ಮೂಲಕ ಅಲ್ಲಾಹನ ಸಾಮೀಪ್ಯವನ್ನು ಉದ್ದೇಶಿಸಿದರೆ ಅವನು ಆ ಕರ್ಮಕ್ಕೆ ಪುಣ್ಯ ಮತ್ತು ಪ್ರತಿಫಲಗಳನ್ನು ಪಡೆಯುತ್ತಾನೆ. ಅದು ತಿನ್ನುವುದು ಕುಡಿಯುವುದು ಮುಂತಾದ ರೂಢಿಯಾಗಿ ಮಾಡುವ ಕರ್ಮಗಳಾಗಿದ್ದರೂ ಸಹ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉದ್ದೇಶವು ಬಾಹ್ಯವಾಗಿ ನೋಡುವಾಗ ಒಂದೇ ರೂಪದಲ್ಲಿದ್ದರೂ ಸಹ ಅದು ಒಳಗೊಂಡಿರುವ ಪರಿಣಾಮವನ್ನು ಒಂದು ಉದಾಹರಣೆಯ ಮೂಲಕ ವಿವರಿಸುತ್ತಾರೆ. ಅವರು ವಿವರಿಸುವಂತೆ, ಒಬ್ಬ ವ್ಯಕ್ತಿ ಅಲ್ಲಾಹನ ಸಂಪ್ರೀತಿಯನ್ನು ಉದ್ದೇಶಿಸಿ ತನ್ನ ಊರನ್ನು ತೊರೆದು ವಲಸೆ (ಹಿಜ್ರ) ಹೋದರೆ ಅದು ಧಾರ್ಮಿಕ ರೂಪದಲ್ಲಿರುವ ಸ್ವೀಕಾರಯೋಗ್ಯ ವಲಸೆಯಾಗಿದ್ದು ಅವನ ಉದ್ದೇಶದ ಪ್ರಾಮಾಣಿಕತೆಯಿಂದಾಗಿ ಪ್ರತಿಫಲಾರ್ಹವಾಗುತ್ತದೆ. ಆದರೆ ಒಬ್ಬ ವ್ಯಕ್ತಿ ತನ್ನ ವಲಸೆಯ (ಹಿಜ್ರ) ಮೂಲಕ ಹಣ ಸಂಪಾದಿಸುವುದು, ಸ್ಥಾನಮಾನವನ್ನು ಪಡೆಯುವುದು, ವ್ಯಾಪಾರ ಮಾಡುವುದು, ವಿವಾಹವಾಗುವುದು ಮುಂತಾದ ಭೌತಿಕ ಲಾಭವನ್ನು ಉದ್ದೇಶಿಸಿದರೆ, ಅವನು ತನ್ನ ವಲಸೆಯ ಮೂಲಕ ಅವನು ಉದ್ದೇಶಿಸಿದ ಲಾಭವನ್ನಲ್ಲದೆ ಬೇರೇನನ್ನೂ ಪಡೆಯುವುದಿಲ್ಲ. ಹಿಜ್ರ ಮಾಡಿದ್ದಕ್ಕಾಗಿ ಅವನಿಗೆ ಯಾವುದೇ ಪ್ರತಿಫಲ ಸಿಗುವುದಿಲ್ಲ.